ವಾರಭವಿಷ್ಯ 17.05.2026 ರಿಂದ 23.05.2026ರ ತನಕ
ಮೇಷ : ದೈವ ಬಲ ಕಡಿಮೆ ಇರುವುದರಿಂದ ವ್ಯವಹಾರ ಕ್ಷೇತ್ರದಲ್ಲಿ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ. ಸುಲಭ ಪರಿಹಾರವಾಗಿ ಪ್ರತಿ ನಿತ್ಯ “ಓಂ ಕ್ಲೀಮ್ ಕೃಷ್ಣಾಯ ನಮ:”ಪ್ರತಿನಿತ್ಯ 108 ಬಾರಿ ಹೇಳಿರಿ,ಅಥವಾ ಬರೆಯಿರಿ, ಪ್ರೀತಿ ಪಾತ್ರರೊಂದಿಗೆ ವಿರಸಗಳು ಬಾರದಂತೆ ಎಚ್ಚರವಹಿಸಿರಿ.
ವೃಷಭ : ದ್ವಿತೀಯಾದಲ್ಲಿ ಗುರುವಿನೊಂದಿಗೆ ಶುಕ್ರನಿರುವುದರಿಂದ ಬರುವ ಆದಾಯದಲ್ಲಿ ಕೊರತೆಯಾಗುವ ಸೂಚನೆ ಇರುತ್ತದೆ. ಬುಧಾದಿತ್ಯ ಯೋಗ ಬಂದಿದೆ ಬರುವ ಆದಾಯದಲ್ಲಿ ಶನಿ ಉತ್ತಮ ಸಹಕಾರವನ್ನು ನೀಡುತ್ತಲೇ ಬಂದಿದ್ದಾನೆ. ಉನ್ನತ ಪದವಿ ಧಾರಣೆ ಮಾಡಲಿರುವಿರಿ.
ಮಿಥುನ : ಗುರು ಮತ್ತು ಶುಕ್ರ ಜೊತೆಯಾಗಿ ಜನ್ಮ ರಾಶಿಯಲ್ಲಿ ಇರುವುದರಿಂದ ಶ್ರೀ ಗಣಪತಿ ಅಷ್ಟೋತ್ತರ ಪಾರಾಯಣ ಮಾಡುವ ಅಗತ್ಯವಿದೆ. ಸಹೋದರ ವರ್ಗದವರ ಸಹಾಯ ನಿಮಗೆ ಸಿಗಲಿದೆ ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ದಾಂಪತ್ಯದಲ್ಲಿ ಅನುಮಾನವೆಂಬ ಪಿಶಾಚಿ ಕಾಟ ನೀಡಲಿದೆ. ಎಚ್ಚರವಾಗಿರಿ.
ಕರ್ಕಾಟಕ : ನಾಗ ದೇವರ ಪ್ರಾರ್ಥನೆ ನಿಮಗೆ ಅಗತ್ಯವಾಗಿದೆ. ಅಲರ್ಜಿ ತಲೆನೋವು ಮಾನಸಿಕ ಒತ್ತಡ ಉಂಟಾಗಲಿದೆ. ಕಡಲೆ ಬೆಲ್ಲ ಗೋವುಗಳಿಗೆ ನೀಡುವುದು ಅಗತ್ಯವಾಗಿದೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ.
ಸಿಂಹ : ಲಾಭ ಕ್ಷೇತ್ರದಲ್ಲಿ ಇರುವ ಗುರು ಶುಕ್ರ ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಾಗುವವರು ನೀವಾಗಬೇಕಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಪರಮ ಸತ್ಯ ನಿಮ್ಮ ಅರಿವಿಗೆ ಬರಲಿದೆ. ಮಕ್ಕಳ ವಿಷಯದಲ್ಲಿ ಮಾನಸಿಕ ಸಂಘರ್ಷಗಳಾಗಲಿದೆ.
ಕನ್ಯಾ : ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಇನ್ನೂ ಕೆಲವೇ ದಿನಗಳಲ್ಲಿ ಗುರು ಲಾಭ ಕ್ಷೇತ್ರಕ್ಕೆ ಬರುವುದರಿಂದ ನಿಮ್ಮ ಜೀವನದ ಚಿತ್ರಣವೇ ಬದಲಾಗಲಿದೆ. ದಾಂಪತ್ಯದಲ್ಲಿ ವಿರಸ ಬಾರದಂತೆ ಎಚ್ಚರವಹಿಸಿರಿ. ವಾಹನ ಚಾಲಕರೇ ಎಚ್ಚರವಾಗಿರಿ.
ತುಲಾ : ಗುರು ಶುಕ್ರ ಭಾಗ್ಯದಲ್ಲಿ ಜೊತೆಯಾಗಿರುವುದು ನಿಮ್ಮ ಭಾಗ್ಯದಯವನ್ನು ಹೆಚ್ಚಿಸಿದೆ. ಹೊಸ ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸಲು ಒಳ್ಳೆಯ ಸಮಯ. ಚಿನ್ನಾಭರಣ ಖರೀಧಿ ಮಾಡುವಿರಿ. ಗರ್ಭಿಣಿಯರು ಎಚ್ಚರವಾಗಿರಿ. ಮಕ್ಕಳ ವಿಷಯದಲ್ಲಿ ಕೆಲವೊಮ್ಮೆ ಬೇಸರ ಮಾಡಲಿರುವಿರಿ.
ವೃಶ್ಚಿಕ : ಜೂನ್ 02 ರ ವರೆಗೆ ಕಾಯುವ ಅನಿವಾರ್ಯತೆ ಇರುತ್ತದೆ. ಆಗ ಗುರು ಕರ್ಕಾಟಕ ರಾಶಿಗೆ ಉಚ್ಚ ಗ್ರಹನಾಗಿ ಬರಲಿದ್ದಾನೆ. ಕುಜ ನಿಮ್ಮಲ್ಲಿ ನಿರಾಳತೆಯನ್ನು ತಂದಿದ್ದಾನೆ. ಭೂಮಿ ವ್ಯವಹಾರ ಮಾಡುವವರಿಗೆ ಒಳ್ಳೆಯ ಆದಾಯವನ್ನು ತರಲಿದ್ದಾನೆ. ಸಂಗಾತಿಯ ಕಿರಿಕಿರಿ ನಿರಂತರ ಇರಲಿದೆ.
ಧನು : ಮನೆಯ ಸದಸ್ಯರೊಂದಿಗೆ ಯುದ್ಧ ಮಾಡಲಿರುವಿರಿ. ಮಾನಸಿಕ ಚಂಚಲತೆ ಮೂಡಲಿದೆ. ರವಿ ಬುಧ ಜೊತೆಯಾಗಿದ್ದು ಬುಧಾದಿತ್ಯ ಯೋಗವನ್ನು ತರಲಿದ್ದಾರೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ವಾಹನ ಚಾಲಕರು ಎಚ್ಚರವಹಿಸಬೇಕು. ಕಾಲು ಗಂಟು ನೋವು ಬರುವ ಸಾಧ್ಯತೆ ಇರುತ್ತದೆ.
ಮಕರ : ಇನ್ನೂ ಕೆಲವೇ ದಿನಗಳಲ್ಲಿ ಉತ್ತಮ ದೈವಾನುಗ್ರಹ ಯೋಗ ಬರಲಿದೆ . ರಾಜಕೀಯ ವ್ಯಕ್ತಿಗಳಿಗೆ ಮಾತಾಡುವ ವಿಷಯಗಳು ಅಧಿಕವಿದ್ದರೂ ಅದು ಇತಿಮಿತಿಯಲ್ಲಿರಬೇಕು. ಕುಜ ತಿಳಿಸುವಂತೆ ನಿಮ್ಮ ತಾಯಿಯವರ ಆರೋಗ್ಯದ ಕಡೆಗೆ ಗಮನ ಕೊಡುವುದು ಆಗತ್ಯವಿರುತ್ತದೆ.
ಕುಂಭ : ಬೆಳಿಗ್ಗೆ ಎದ್ದ ತಕ್ಷಣ ಮೊದಲ ಕೆಲಸ ನಾಗದೇವರ ಪ್ರಾರ್ಥನೆಯಾಗಿರಲಿ. ದೈವಾನುಗ್ರಹ ಉತ್ತಮವಾಗಿದೆ. ರಾಜಕೀಯ ಗಣ್ಯರಿಗೆ ರವಿ ಬುಧ ಜೊತೆಯಾಗಿರುವುದು ಶುಭ ಸೂಚಕವಾಗಿದೆ. ಉತ್ತಮ ಪದವಿ ಪ್ರಾಪ್ತಿ ಯೋಗವಿದೆ. ನೀವಾಡುವ ಮಾತು, ಮಾಡುವ ಹಣದ ಖರ್ಚು ನಿಮ್ಮ ಹಿಡಿತದಲ್ಲಿರಲಿ.
ಮೀನಾ : ಪಿತ್ರಾರ್ಜಿತ ಆಸ್ತಿ ಸಿಗಲಿರುವ ಸಮಯ. ವಕೀಲ ವೃತ್ತಿಯವರಿಗೆ ಶುಭೋದಯದ ಸಮಯವಾಗಿದೆ. ಓಂ ನಮೋ ಭಗವತೇ ವಾಸುದೇವಾಯ “ಮಂತ್ರವನ್ನು ಪ್ರತಿನಿತ್ಯ 108 ಬಾರಿ ಹೇಳಿರಿ. ಒಮ್ಮೆಲೇ ಮುನ್ನುಗ್ಗಿ ಬರುವ ಸಿಟ್ಟನ್ನು ಹಿಡಿತದಲ್ಲಿ ಇಟ್ಟುಕೊಳ್ಳಿರಿ.



































