ಭಕ್ತಾದಿಗಳ ಪ್ರಾರ್ಥನೆಯಿಂದ ಧಾರ್ಮಿಕ ನೆಲೆಬೀಡುಗಳಲ್ಲಿ ಚೈತನ್ಯ ಶಕ್ತಿ ಹೊಮ್ಮುತ್ತದೆ

Picture of RB NEWS

RB NEWS

Bureau Report

ಉಡುಪಿ : ಯಾವುದೇ ಕೆಲಸ ಕಾರ್ಯಗಳು ಒಗ್ಗಟ್ಟಿನಿಂದ ಮಾಡಿದಾಗ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಭಕ್ತಾದಿಗಳ ಪ್ರಾರ್ಥನೆಯಿಂದ ಧಾರ್ಮಿಕ ನೆಲೆಬೀಡುಗಳಲ್ಲಿ ಚೈತನ್ಯ ಶಕ್ತಿ ಹೊಮ್ಮುತ್ತದೆ ಎಂದು ಉದ್ಯಮಿ ಎನ್. ಟಿ.ಅಮೀನ್ ಹೇಳಿದರು.

ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು‌ ಉದ್ದೇಶಿಸಿ ಅವರು ಮಾತನಾಡಿದರು.

ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದಾಗಿದೆ. ಆ ಮೂಲಕ ಧಾರ್ಮಿಕ ಶಕ್ತಿಗಳು ಇನ್ನಷ್ಟು ಬೆಳಗಲು ಪ್ರೇರಣಶಕ್ತಿಯಾಗಲಿ ಎಂದರು.

ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಧು ಸಾಲ್ಯಾನ್, ಉಡುಪಿ ನಗರ ಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್, ನಗರ ಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸ್ಮರಣಿಕ ಉಡುಪಿ ಮಾಲಕ ದಿವಾಕರ ಸನಿಲ್, ಸಮಾಜ ಸೇವಕ ಗಣೇಶ್ ನೆರ್ಗಿ, ಅಭಿವೃದ್ದಿ ಮಂಡಳಿ ಅಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನ ಕಾರ್ಯದರ್ಶಿ ಶಶಿಧರ್ ಅಮೀನ್ ಉಪಸ್ಥಿತರಿದ್ದರು.

ಬ್ರಹ್ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿ, ಪಾಂಡುರಂಗ ಮಲ್ಪೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸಹನಾ ಕೃಷ್ಣರಾಜ ಭಟ್ ಮತ್ತು ಬಳಗದವರಿಂದ ಭಕ್ತಿ ಸಂಗೀತ, ವಿದುಷಿ ಶರ್ಮಿಳಾ ರಾವ್ ಮತ್ತು ಶಿಷ್ಯರಿಂದ ವಯೋಲಿನ್ ಕಚೇರಿ ನಡೆಯಿತು.

ಸಭಾ ಕಾರ್ಯಕ್ರಮದ ಬಳಿಕ ರಜತ ತಂತ್ರಿ ಕೊಡವೂರು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಜನಾರ್ದನ್ ಕೊಡವೂರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top