ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಹಾಗೂ ಜನ ಪ್ರತಿನಿಧಿಗಳಲ್ಲಿ ಒಂದು ಮನವಿ
RB NEWS
Bureau Report
ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಹಾಗೂ ಜನ ಪ್ರತಿನಿಧಿಗಳಲ್ಲಿ ಒಂದು ಮನವಿ
ಹೆಬ್ರಿ: ಬೇಳಂಜೆ ತೆಂಕಹೊಲದಿಂದ ಹೊನ್ಕಲ್ ವರೆಗೆ ಸಂಚರಿಸುವ ವಾಹನ ಸವಾರರು, ಚಾಲಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಬಹುತೇಕ ಮರಗಳು ರಸ್ತೆಗೆ ಬಾಗಿ ಬೀಳುವ ಹಂತದಲ್ಲಿದೆ ಈಗಾಗಲೇ ಕೆಲವು ಮರಗಳು ರಸ್ತೆಗೆ ಉರುಳಿದೆ ಹಾಗೆ ಅಪಾಯದ ಮುನ್ಸೂಚನೆ ನೀಡುತ್ತಿದೆ. ಕೆಲವೊಂದು ಕೊಂಬೆಗಳು ಮರದಿಂದ ಬೇರ್ಪಟ್ಟು ಧರೆಶಾಹಿಯಾಗಿರುವುದು ಡಾಂಬರು ರಸ್ತೆ ಮೇಲೆ. ಪ್ರತಿ ದಿನ ನೂರಾರು ವಾಹನಗಳು ಆ ರಸ್ತೆಯಲ್ಲಿ ಸಂಚರಿಸುತ್ತವೆ.
ಅಪಾಯಕಾರಿ ಮರದ ಕೊಂಬೆಗಳನ್ನು ತೆರವುಗೊಳಿಸಬೇಕಾಗಿ ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ಜನಪ್ರತಿಗಳನ್ನು ಒತ್ತಾಯಿಸುತ್ತಿದ್ದಾರೆ.