ವಿಪರೀತ ಪ್ಲಾಸ್ಟಿಕ್ ಬಳಕೆಯಿಂದಾಗುವ ಅಗುವಂತಹ ವಿಪತ್ತು

ಕಾರ್ಕಳ : ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ, ಇಲ್ಲಿಯ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲಾ ಹೊರಗಿನ ಪರಿಸರದಲ್ಲಿ ಭೂಮಿಯನ್ನು ಧ್ಯೇಯವಾಗಿಟ್ಟುಕೊಂಡು ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನ ದಿನವನ್ನು ಆಚರಿಸಲಾಯಿತು.
ಶಾಲಾ ಗೈಡರ್ ಸೀಮಾ ಕಾಮತ್ ಹಾಗೂ ಸ್ಕೌಟರ್ ಸುಜಾತ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಮ್ಮ ಕೈಯಾರೇ ಬಟ್ಟೆ ಬ್ಯಾಗಗಳನ್ನು ಹೊಲಿದು, ಇಂತಹುದೆ ಬ್ಯಾಗ್ ಗಳನ್ನು ಬಳಸುವಂತೆ ಕಾರ್ಕಳದ ಪರಿಸರದ ಜನರಿಗೆ ಕರೆ ನೀಡಿದರು.

ಭೂಮಿಗೆ ವಿಪರೀತ ಪ್ಲಾಸ್ಟಿಕ್ ಬಳಕೆಯಿಂದಾಗುವ ಅಗುವಂತಹ ವಿಪತ್ತು ಗಳ ಕುರಿರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸಹಾಯಕ ಗೈಡ್ ಕಮಿಷನರ್ ವಿದ್ಯಾ ಕಿಣಿ ಅವರು ಬ್ಯಾಗ್ ಗಳನ್ನು ಜನರಿಗೆ ವಿತರಿಸಿದರು






































