ಬೋಳ ಸುರೇಂದ್ರ ಕಾಮತ್ ಚಾರಿಟೇಬಲ್ ಟ್ರಸ್ಟ್ ಮತ್ತು ಕಾರ್ಕಳ ಟೈಗರ್ಸ್ ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ಮತ್ತು ಕೊಡೆ ಬಾಗ್ ವಿತರಣೆ
ಕಾರ್ಕಳ : ಕಾರ್ಕಳ ನಗರ ಪ್ರದೇಶದ ಕಾಲೋನಿಗಳಿಗೆ ಮತ್ತು ಹುಲಿ ಕುಣಿತ ಕಲಿಯುತ್ತಿರುವಂತಹ ಮಕ್ಕಳಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗುವ ದೃಷ್ಟಿಕೋನದಿಂದ ಪುಸ್ತಕ ಮತ್ತು ಕೊಡೆ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಬೋಳ ಸುರೇಂದ್ರ ಕಾಮತ್ ಚಾರಿಟೇಬಲ್ ಟ್ರಸ್ಟ್ ಮತ್ತು ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಳ್ಳಲಾಯಿತು.



ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ದಾಮೋದರ್ ಕಾಮತ್ ವಹಿಸಿದರು. ಅತಿಥಿ ಸ್ಥಾನವನ್ನು ಪ್ರಶಾಂತ್ ಕಾಮತ್ ವಹಿಸಿದರು. ಪ್ರಕಾಶ್ ರಾವ್ ನಿರೂಪಿದರು. ಕವಿತಾ ಹರೀಶ್ ಪ್ರಸ್ತಾವನೆ ಗೈದರು. ರಮಿತಾ ಶೈಲೇಂದ್ರ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಟೈಗರ್ಸ್ ತಂಡದ ಸರ್ವ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.






































