ನರ್ಸರಿ ಮಾಲಕರ ಉದಾರತೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ನರ್ಸರಿ ಮಾಲಕರೊಬ್ಬರು ತನ್ನ ಉದಾರತೆಯನ್ನು ತೋರಿ, ಮುಂದಿನ ಯುವ ಪೀಳಿಗೆಗೆ ಪರಿಸರ ಜಾಗೃತಿಯ ಅರಿವು ಮೂಡಿಸುವ ಸಲುವಾಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ನಾನಾ ಬಗೆಯ ಹೂವಿನ, ಹಣ್ಣಿನ ಸಸಿಗಳನ್ನು ನೆರವು ನೀಡಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ದಿನವಾದ ಜೂನ್ 5ರಂದು ವಿದ್ಯಾರ್ಥಿಗಳ ಕೈಯಾರೆ ಅವುಗಳನ್ನು ನೆಟ್ಟು ಪೋಷಿಸುವಂತೆ ಉತ್ತೇಜನ ನೀಡಿ ಸಮಾಜಕ್ಕೆ ಮಾದರಿ ಎನ್ನಿಸಿಕೊಂಡಿದ್ದಾರೆ ಕಾರ್ಕಳ ಗೌರಿ ನರ್ಸರಿಯ ಮಾಲಕ ಆದಿತ್ಯ ಕುಡ್ವ….
ಕಾರ್ಕಳ : ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ, ಇಲ್ಲಿಯ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಕಳ ಗೌರಿ ನರ್ಸರಿಯ ಆದಿತ್ಯ ಕುಡ್ವ ಅವರ ಪ್ರಾಯೋಜಕತ್ವದ ವಿವಿಧ ಹಣ್ಣಿನ ಹಾಗೂ ಹೂವಿನ ಸಸ್ಯಗಳನ್ನು ಸ್ಕೌಟ್ ಅಂಡ್ ಗೈಡ್ ಮಕ್ಕಳಿಗೆ ನೀಡುವ ಮುಖೇನ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು .
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಜಿಲ್ಲಾ ಸಹಾಯಕ ಗೈಡ್ ಆಯುಕ್ತೆ ವಿದ್ಯಾ ವಿ ಕಿಣಿಯವರು ಮಕ್ಕಳಿಗೆ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು .
ಗೈಡರ್ ಸೀಮಾ ಕಾಮತ್ ಅವರು ಮಕ್ಕಳಿಗೆ ಮಾರ್ಗದರ್ಶನವಿತ್ತರು. ಸ್ಕೌಟರ್ ಸುಜಾತ ಹೆಗ್ಡೆ ವಂದಿಸಿದರು.
ಸಹ ಶಿಕ್ಷಕಿರಾದ ಗಾಯತ್ರಿ ಕಿಣಿ , ರಾಧಿಕಾ ಶೆಣೈ, ಪುಷ್ಪ, ಅರ್ಚನಾ ಕಿಣಿ ಹಾಗೂ ಶುಭಲಕ್ಷ್ಮಿ ಉಪಸ್ಥಿತರಿದ್ದರು .
ಮಕ್ಕಳು ಪರಿಸರ ದಿನಾಚರಣೆಗೆ ಸಂಬಂಧಪಟ್ಟ ವಿವಿಧ ಭಿತ್ತಿ ಪತ್ರ ಹಾಗೂ ಫಲಕಗಳನ್ನು ತಯಾರಿಸಿ ಪರಿಸರ ದಿನಾಚರಣೆಯ ಮಹತ್ವವನ್ನು ಸಾರಿದರು. ಗಿಡಗಳಿಗೆ ಸಂಭಂದಿಸಿದ ಸ್ವರಚಿತ ಹಾಡನ್ನು ಹಾಡಿದರು.






































