ಲೋಕ ಸಭಾ ಚುನಾವಣೆ ಘೋಷಣೆ ಆಗಿದೆ .ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ .ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತ್ತು ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೇ 7 ರಂದು ಮತದಾನ ನಡೆದು ಫಲಿತಾಂಶ 04.06.2024 ರಂದು ಪ್ರಕಟವಾಗಲಿದೆ .
ಆ ದಿನ ಮಂಗಳವಾರ ,ಭರಣಿ ನಕ್ಷತ್ರ ಮೇಷ ರಾಶಿ ಆಗಿರುತ್ತದೆ .ಚಂದ್ರ ಮತ್ತು ಕುಜ ಮೇಷ ರಾಶಿಯಲ್ಲಿ ; ರವಿ ಬುಧ , ಗುರು,ಶುಕ್ರ ವೃಷಭ ರಾಶಿಯಲ್ಲಿ ,ಕೇತು ಮತ್ತು ಮಾಂದಿ ಕನ್ಯಾ ರಾಶಿಯಲ್ಲಿ ಶನಿ ಕುಂಭ ರಾಶಿಯಲ್ಲಿ ರಾಹು ಮೀನ ರಾಶಿಯಲ್ಲಿ ಇರುತ್ತಾರೆ ,
ಶುಭ ಫಲ ಅಥವಾ ಗುರುವಿನ ಅನುಗ್ರಹ ,ದೈವಾನುಗ್ರಹ ಹೊಂದಿರುವ ರಾಶಿಗಳು ಈ ರೀತಿ ಇವೆ ;1 . ಮೇಷ ರಾಶಿಯವರಿಗೆ ದ್ವಿತೀಯಾದಲ್ಲಿ ರವಿ ಬುಧ,ಗುರು ಶುಕ್ರ ಬಂದಿದ್ದುಉತ್ತಮ ಯೋಗವನ್ನು ಕೊಡುತ್ತಿದ್ದಾರೆ . ಶನಿಯೂ ರಾಜಕೀಯ ಬಲವನ್ನು ಕೊಡುವವನಾಗಿದ್ದು ಲಾಭ ಕ್ಷೇತ್ರದಲ್ಲಿ ಇದ್ದಾನೆ .
2.ಕರ್ಕಾಟಕ ರಾಶಿಯವರಿಗೆ ಲಾಭ ಕ್ಷೇತ್ರದಲ್ಲಿ ರವಿ ಬುಧ ಗುರು ಶುಕ್ರ ಹೀಗೆ 4 ಗ್ರಹರ ಸಂಯೋಗ ಅತ್ಯುತ್ತಮವಾಗಿದೆ . ಶನಿಗೆ ಉತ್ತಮವಾದ ಪರಿಹಾರವೊಂದನ್ನು ಮಾಡಿಕೊಳ್ಳಬೇಕು . ವಿಷ್ಣು ಸಹಸ್ರನಾಮ ಪಾರಾಯಣ 1008 ಬಾರಿ ಮಾಡಿಸಿ ವಿಷ್ಣು ದೇವರಿಗೆ ವಿಶೇಷ ಸೇವೆಯನ್ನು ಮಾಡಿಸಬೇಕು .
3.ಕನ್ಯಾ ರಾಶಿಯವರಿಗೆ ಜನ್ಮದಲ್ಲಿ ಇರುವ ಕೇತುವಿಗೆ ,ಅಷ್ಟಮದಲ್ಲಿ ಇರುವ ಚಂದ್ರ ಮತ್ತು ಕುಜನಿಗೆ ಪರಿಹಾರ ಅಗತ್ಯ . ಆದರೆ ಭಾಗ್ಯದಲ್ಲಿ 4 ಗ್ರಹರು ರವಿ,ಬುಧ ,ಗುರು ,ಶುಕ್ರ ಮತ್ತು 6 ನೇ ಮನೆಯಲ್ಲಿ ಶನಿ ಇರುವುದರಿಂದ ಇವರಿಗೆ ಶುಭವಾಗಲಿದೆ .
4.ವೃಶ್ಚಿಕ ರಾಶಿಯ ಅಭ್ಯರ್ಥಿಗಳಿಗೆ ಅತ್ಯಂತ ಶುಭದಾಯಕವಾದ ದಿನವಾಗಿದೆ . ಶನಿ ಮತ್ತು ರಾಹುವಿಗೆ ಪರಿಹಾರ ಅಗತ್ಯ .6 ನೇ ಮನೆಯಲ್ಲಿ ಚಂದ್ರ ಮತ್ತು ಕುಜ ಸಪ್ತಮದಲ್ಲಿ ಇರುವ ರವಿ,ಬುಧ ,ಗುರು ,ಶುಕ್ರ ,ಲಾಭ ಕ್ಷೇತ್ರದಲ್ಲಿ ಬಂದಿರುವ ಕೇತು ಮತ್ತು ಮಾಂದಿ ಅದ್ಭುತ ಯಶಸ್ಸನ್ನು ನೀಡಲಿದ್ದಾರೆ .
5.ಮಕರ ರಾಶಿಯ ಅಭ್ಯರ್ಥಿಗಳಿಗೆ ದ್ವಿತೀಯದ ಶನಿಗೆ ಪರಿಹಾರ ಅಗತ್ಯ . ಸುಖ ಸ್ಥಾನದ ಚಂದ್ರ ಮತ್ತು ಕುಜನಿಗೆ ಪರಿಹಾರ ಅಗತ್ಯವಿದೆ ,ಪಂಚಮದಲ್ಲಿ ಬಂದಿರುವ ರವಿ ಬುಧ ಶುಕ್ರ ದೋಷವನ್ನು ಸೂಚಿಸುತ್ತಿದ್ದರೂ ,ಜೊತೆಯಲ್ಲಿ ಗುರು ಬಂದಿರುವುದರಿಂದ ಶುಭವಾಗಲಿದೆ . ಪ್ರಯತ್ನ ಅಗತ್ಯವಿದೆ .
ಉಳಿದ ರಾಶಿಯವರಿಗೆ ಈ ಸಮಯದಲ್ಲಿ ಗುರುವಿನ ಅನುಗ್ರಹವಿರುವುದಿಲ್ಲ .ಮೂಲ ಜಾತಕದ ವಿಮರ್ಶೆ ಮಾಡಿಕೊಂಡು ಮುಂದುವರಿಯಬೇಕು .ಎಲ್ಲರಿಗೂ ಶುಭವಾಗಲಿ .








































