[t4b-ticker]

ಭಟ್ಕಳ: ಅಪಹರಣಕಾರರ ಬಂಧನ

Picture of RB NEWS

RB NEWS

Bureau Report

ಸಾಂದರ್ಭಿಕ ಚಿತ್ರ

ಉಡುಪಿ : ಫೆ.26-27ರಂದು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಏಳು ಮಂದಿ ಮೀನುಗಾರರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಈ ಘಟನೆ ಸಂಬಂಧಿಸಿದಂತೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.


ಬಂಧಿತ ಆರೋಪಿಗಳಾದ ಭಟ್ಕಳದ ಸುಬ್ರಮಣ್ಯ ಖಾರ್ವಿ (34), ರಾಘವೇಂದ್ರ ಖಾರ್ವಿ (38), ಹರೀಶ್ ನಾರಾಯಣ ಖಾರ್ವಿ (40), ನಾಗೇಶ ನಾರಾಯಣ (42), ಗೋಪಾಲ್ ಮಾದವ್ (38), ಸಂತೋಷ ದೇವಯ್ಯ (43) ಮತ್ತು ಲಕ್ಷ್ಮಣ (50) ಎಂದು ಗುರುತಿಸಲಾಗಿದೆ.ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು.

ಆರೋಪಿಗಳು ಕೃಷ್ಣಾನಂದ ಎಂಬ ಹೆಸರಿನ ಬೋಟ್ ನಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರನ್ನು ದರೋಡೆ ಮಾಡಿ ಅಪಹರಿಸಿದ್ದರು. ಬೋಟ್ ಫ್ಯಾನ್‌ಗೆ ಬೋಟ್‌ನ ಬಲೆ ಸಿಲುಕಿದ್ದರಿಂದ ದೋಣಿ ನಿಂತಿತು. ಆರೋಪಿಗಳು ಮೀನುಗಾರರ ಮೇಲೆ ಏಕಾಏಕಿ ದಾಳಿ ನಡೆಸಿ ದೋಣಿಯನ್ನು ದಡಕ್ಕೆ ಎಳೆದೊಯ್ದಿದ್ದಾರೆ. ಮೀನುಗಾರರನ್ನು ಅಪಹರಿಸಿ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಮೀನು ಮತ್ತು 7,500 ಲೀಟರ್ ಡೀಸೆಲ್ ದರೋಡೆ ಮಾಡಿದ್ದಾರೆ. ಬೋಟ್‌ನಲ್ಲಿ ತುಂಬಿದ್ದ 5,76,700 ಲಕ್ಷ ರೂ. ಅವರು ಮೀನುಗಾರರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top