ಅಂತರ್ ರಾಜ್ಯ ಕಳ್ಳಿಯ ಬಂಧನ: ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ವಶಕ್ಕೆ

Picture of RB NEWS

RB NEWS

Bureau Report

ಪುತ್ತೂರು: ಕೈಚಳಕವನ್ನು ತನ್ನ ದುಡಿಮೆ ಎಂದು ಸಾಧಿಸಿ, ಬಸ್ಸುಗಳಲ್ಲಿ ಪ್ರಯಾಣಿಕರ ಬ್ಯಾಗ್ ಎಗರಿಸುವ ಕಾಯಕದಲ್ಲಿ ಅಂತರ್ ರಾಜ್ಯ ಕಳ್ಳಿಯೊಬ್ಬಳನ್ನು ಪುತ್ತೂರು ಪೊಲೀಸರು ಬಂಧಿಸಿ ಕಳವುಗೈದ ಸುಮಾರು ರೂ. 6 ಲಕ್ಷ ಚಿನ್ನಾಭರಣವನ್ನು ವಶಪಡಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಸಿಕ್ಕಿಲಂಪಳಯಂ ನಿವಾಸಿ ಈಶ್ವರಿ(45) ಬಂಧಿತೆ.

ಬಂಧಿತೆಯಿಂದ ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈಕೆ ಪುತ್ತೂರು ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ರೇಷ್ಮಾ ಎಂಬ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಳು.

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top