ಸುಬ್ರಹ್ಮಣ್ಯ ಧಾರೇಶ್ವರ ಅನುಸ್ಮೃತಿ, ಕುಂಬಳೆ ಶ್ರೀಧರ ರಾವ್ ನುಡಿ ನಮನ

ಮೂಡುಬಿದಿರೆ: ಕಾಳಿದಾಸ ಮಾಸದ ಅಂಗವಾಗಿ ಜುಲೈ 20ರಂದು ಮೂಡುಬಿದಿರೆ ಸಮೀಪದ ಸಂಪಿಗೆ ಶ್ರೀ ದುರ್ಗ ಜ್ಯೋತಿಶ್ಯಾಲಯದಲ್ಲಿ ನಡೆದ ಕವಿರತ್ನ ಕಾಳಿದಾಸ ಆಖ್ಯಾನ ಯಕ್ಷಗಾನ ತಾಳಮದ್ದಳೆಯಲ್ಲಿ ಹರಿಹರಪುರ ಶಂಕರ ಭಟ್ ಭಾಗವತರಾಗಿ, ಎಲ್ಲಾಪುರ ರಾಘವೇಂದ್ರ ಹೆಗಡೆ ಮದ್ದಲೆಯಲ್ಲಿ, ಕೋಟ ಶಿವಾನಂದ ಚಂಡೆಯಲ್ಲಿ ಸಹಕರಿಸಿದರು. ಅರ್ಥದಾರಿಗಳಾಗಿ ಡಾ. ಎಂ ಪ್ರಭಾಕರ ಜೋಶಿ, ಡಾ. ಯೋಗಿ ಸುಧಾಕರ ತಂತ್ರಿ, ವಿದ್ವಾನ್ ವೆಂಕಟರಮಣ ಕೆರೆಗದ್ದೆ, ಡಾ. ವಿನಾಯಕ ಭಟ್ಟ ಗಾಳಿಮನೆ, ಕೃಷ್ಣಮೂರ್ತಿ ಮಾಯಣ,ಸದಾಶಿವ ರಾವ್ ನೆಲ್ಲಿಮಾರು, ಚಾರ ಪ್ರದೀಪ ಹೆಬ್ಬಾರ ಸಹಕರಿಸಿದ್ದರು.






































