[t4b-ticker]

ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವಗುರು

Picture of RB NEWS

RB NEWS

Bureau Report

ಕಾರ್ಕಳ : ಗೋಮಾಂಸ ರಪ್ತಿನಲ್ಲಿ ಭಾರತವು ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೊದಲು ಈ ಬಗ್ಗೆ ಕ್ರಮ ಕೈಗೊಂಡರೆ ದೇಶದ ವಿವಿದೆಡೆಗಳಲ್ಲಿ ನಡೆಯುತ್ತಿರುವ ಗೋಹತ್ಯೆಗೆ ಕಡಿವಾಣ ಬೀಳಲು‌ ಸಾಧ್ಯವಿದೆ, ಅಕ್ರಮ ಗೋಹತ್ಯೆ ನಿಗ್ರಹವನ್ನು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಲಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.

ಸಾಂಬಾರ ಪದಾರ್ಥಗಳ ರಪ್ತಿಗೆ ಹೆಸರುವಾಸಿಯಾಗಿದ್ದ ಭಾರತವು ಪ್ರಸ್ತುತ ‌ಬಿಜೆಪಿ ಆಡಳಿತದಲ್ಲಿ ಗೋಮಾಂಸ ರಪ್ತಿಗೆ ಜಗತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆದಿರುವುದು ಅತ್ಯಂತ ದುರದೃಷ್ಟಕರ. ಭಾಷಣದಲ್ಲಿ ಗೋಪ್ರೇಮವನ್ನು ತೋರ್ಪಡಿಸಿ ಲಾಭದ ಆಸೆಗೆ ಗೋಮಾಂಸವನ್ನು ರಪ್ತು ಮಾಡುವವರಿಂದ ಕಾಂಗ್ರೆಸ್ ಪಾಠ ಕಲಿತುಕೊಳ್ಳಬೇಕಿಲ್ಲ.

ಅಕ್ರಮ ಗೋಹತ್ಯೆ ಪ್ರಕರಣದಲ್ಲಿ ಕೇಳಿ ಬರುತ್ತಿರುವ ಹೆಸರುಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದು ಆರೋಪ ಮಾಡಿರುವ ಶಾಸಕ ಸುನೀಲ್ ಕುಮಾರ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಗೋವಿನ ರಕ್ಷಣೆಯ ಹೆಸರು ಹೇಳಿಕೊಂಡು ನಾಲ್ಕು ಅವಧಿಗೆ ಶಾಸಕರಾಗಿ ಅಧಿಕಾರ ಅನುಭವಿಸಿದ ಸುನಿಲ್ ಕುಮಾರ್ ಶಾಸಕರಾಗಿರುವ ಕ್ಷೇತ್ರದಲ್ಲಿಯೇ ಈ ಪರಿ ಗೋಹತ್ಯೆ ನಡೆಯಲು ಅವರ ಪರೋಕ್ಷ ಬೆಂಬಲವೇ ಕಾರಣ, ಮುಂದಿನಿಂದ ಗೋಭಕ್ತಿ ಹಿಂಬಾಗಲಿನಿಂದ ಗೋಹಂತಕರೊಂದಿಗೆ ದೋಸ್ತಿ ಇದು ಅವರ ನೀತಿಯಾಗಿರುದೇ ಅಕ್ರಮ ಗೋಹತ್ಯೆಗೆ ಕಾರಣ. ನಾಲ್ಕು ಅವಧಿಗೆ ಶಾಸಕರಾಗಿರುವ ಆಡಳಿತರೂಡ ಪರೋಕ್ಷ ಬೆಂಬಲವೇ ಇದಕ್ಕೆ ನೇರ ಹೊಣೆಯಾಗಿದೆ.

ಕಾಂಗ್ರೆಸ್ ಪಕ್ಷ ಯಾವತ್ತೂ ಕೂಡ ಅಕ್ರಮಗಳಿಗೆ ಬೆಂಬಲ ನೀಡಿದ‌ ಪಕ್ಷವಲ್ಲ. ಇನ್ನು ಮುಂದೆಯೂ ಅಕ್ರಮ ಹಾಗೂ ಸಮಾಜಘಾತುಕ ಕೃತ್ಯಗಳನ್ನು ನಡೆಸುವವರಿಗೆ ಬೆಂಬಲ ನೀಡುವುದಿಲ್ಲ ಎನ್ನುವುದನ್ನು ಸುನೀಲ್ ಕುಮಾರ್ ಅರ್ಥಮಾಡಿಕೊಂಡು ಹೇಳಿಕೆ ನೀಡಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top