ಬನ್ನಡ್ಕ ಸಮೀಕ್ಷೆಗೆ ಥರ್ಡ್ ಅಂಪಾಯರ್ : ಸಂಸದ
ಭಾರೀ ಸುದ್ದಿ ಮಾಡಿ ಪ್ರಚಾರಕ್ಕೆ ಸಿಲುಕಿದ್ದ ರಾಷ್ಟ್ರೀಯ ಹೆದ್ದಾರಿ 169ರ ಬನ್ನಡ್ಕ ಎಂಬಲ್ಲಿನ ಕೆಲವೊಂದು ಸಮಸ್ಯೆಗಳ ವೀಕ್ಷಣೆ ಮತ್ತು ಅಲ್ಲಿನ ನಿವಾಸಿಗಳ ಜೊತೆ ಮಾತುಕತೆಗೆ ಸಂಸದ ಬೃಜೇಶ್ ಚೌಟ ಅವರು ಬನ್ನಡ್ಕಕ್ಕೆ ಆಗಮಿಸಿ ಜನರಲ್ಲಿ ಮನೆಮಾಡಿದ್ದ ಆಕ್ರೋಶವನ್ನು ಶಮನಗೊಳಿಸಿದ್ದಾರೆ. ಜೊತೆಗೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕೂಡಾ ಆಗಮಿಸಿದ್ದರು.
ಸಂಸದರ ಆಗಮನದ ನಿರೀಕ್ಷೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು ಮುಖ್ಯವಾಗಿ ಪಡುಮಾರ್ನಾಡು ಗ್ರಾಮಸ್ಥರು ಈ ರಸ್ತೆಯಿಂದ ಉಂಟಾಗಿರುವ ಮತ್ತು ಉಲ್ಬಣಿಸಿರುವ ಸಂಚಾರ ಸಮಸ್ಯೆಗಳನ್ನು ಒಬ್ಬೊಬ್ಬರಾಗಿ ಹೇಳತೊಡಗಿದರು.
ರಸ್ತೆ ದಾಟುವಲ್ಲಿ ಹೆಚ್ಚಿನವರು ಶಾಲಾ ಮಕ್ಕಳು ತಾಯಂದಿರಿರುವುದರಿಂದ ಈ ರಸ್ತೆಗೆ ಅಡ್ಜವಾಗಿ ಸ್ಕೈ ವಾಕ್ ನಿರ್ಮಿಸಬೇಕೆಂದು ಜನರು ಮನವಿ ಮಾಡಿದರು. ರಸ್ತೆಯಲ್ಲಿ ಯೂ ಟರ್ನ್ ತೆಗೆದುಕೊಂಡು ಮತ್ತೊಂದು ಮಗ್ಗಲುಗೆ ಪ್ರವೇಶಿಸಬೇಕಾದರೆ ಸುಮಾರು ಒಂದೂವರೆ ಕಿ. ಮೀ. ದೂರ ಕ್ರಮಿಸಬೇಕಾಗಿರುವುದರಿಂದ ಬನ್ನಡ್ಕದಲ್ಲಿಯೆ ಇದ್ದು ಸಧ್ಯಕ್ಕೆ ತಡೆಮಾಡಿರುವ ಪ್ರವೇಶ ದಾರಿಯನ್ನೆ ಪುನಃ ಒದಗಿಸಬೇಕೆಂದು ಜನರು ತಿಳಿಸಿದರು. ಇನ್ನು ಕೆಲವರು ಝಿಗ್ ಝಾಗ್ ಮಾದರಿಯಲ್ಲಿ ಬೇರಿಕೇಡ್ ಇಡಬೇಕು ಎನ್ನುವ ಸಲಹೆಯನ್ನೂ ನೀಡಿದರು. ಜನರು ಸಂಸದ,ಶಾಸಕ ಇಬ್ಬರನ್ನು ಸುತ್ತುವರಿದುಕೊಂಡೇ ತನ್ನದೊಂದು, ತನ್ನೊದೊಂದು ಎನ್ನುವಂತೆ ಸ್ಪರ್ಧಾತ್ಮಕವಾಗಿ ಪ್ರಶ್ನೆಗಳನ್ನು,ಸಲಹೆಗಳನ್ನು ನೀಡತೊಡಗಿದರು.ಈ ಸಂದರ್ಭದಲ್ಲಿ ರಾ. ಹೆದ್ದಾರಿ ರಚನೆಯ ಯೋಜನಾ ನಿರ್ದೇಶರೂ ಆಗಮಿಸಿದ್ದು ಅವರಲ್ಲಿಯೂ ಜನರು ತಮ್ಮ ಮುಖ್ಯ ಸಮಸ್ಯೆ ಇದುವೇ ಎಂದು ವಿವರಿಸಿದರು. ಕೆಲವು ಪ್ರಸ್ತುತವಾಗಿದ್ದರೆ ಇನ್ನು ಕೆಲವರದು ಅಧಿಕ ಪ್ರಸಂಗವೂ ಆಗಿತ್ತು ಮತ್ತು ಕೆಲವರದ್ದು ಎಸ್ ಕೆ ಎಫ್ ಕಂಪನಿಯ ಮೇಲಿರುವ ಅಸಮಾಧಾನಕ್ಕೂ ಎಂಬಂತೆ ಸಮಸ್ಯೆಯನ್ನು ತಾಳೆ ಹಾಕಲಾಗುತ್ತಿತ್ತು.
ಒಟ್ಚಿನಲ್ಲಿ ಸಂಸದ ಮತ್ತು ಶಾಸಕರ ಭೇಟಿ ಕಾರ್ಯಕ್ರಮವು ಬಹಳ ಶಿಸ್ತುಬದ್ಧವಾಗಿಯೆ ಮುಗಿದಿದೆ. ಕೆಲವು ದಿನಗಳಿಂದ ದಿನಾಂಕ ಮುಂದೂಡುತ್ತಲೆ ಇದ್ದ ಸಂಸದರ ಮೇಲಿನ ಏನೇ ಅಸಮಾಧಾನ ಬಗ್ಗೆ ಕೂಡಾ ಮಾತುಗಳಲ್ಲಿ ವ್ಯಕ್ತವಾಗದೆ ಹೆಚ್ಚು ಸಂತಸದಿಂದಲೇ ಸುತ್ತುವರಿದು ಮಾತಾಡಿದರು. ಗೆದ್ದು ಸಂಸತ್ತಿಗೆ ಹೋದ ಸಂಸದ ತಡವಾಗಿ ಬಂದರೂ ಮಾತಿನಲ್ಲಿ ಯಾವುದೇ ತಡವರಿಕೆ ,ಮುಜುಗರವಿರಲಿಲ್ಲ. ಬಹಳ ತಾಳೆಮೆಯಿಂದಲೇ ಜನರೊಡನೆ ಮಾತುಕತೆಗೆ ತೊಡಗಿದರು.
ಥರ್ಡ್ ಅಂಪಾಯರ್ !











































