ಯುವವಾಹಿನಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಭಾಷಣ ಸ್ಪರ್ಧೆ
ಬಂಟ್ವಾಳ: ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ಇವರ ಸಹಯೋಗದೊಂದಿಗೆ
ಯುವವಾಹಿನಿ ರಿ. ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮದಿನಾಚರಣೆಯ ಅಂಗವಾಗಿ ಭಾಷಣ ಸ್ಪರ್ಧೆ ದಿನಾಂಕ: 17/08/2024 ರಂದು ನಾರಾಯಣ ಗುರು ಸಭಾಭವನ ಗಾಣದಪಡ್ಪು ಬಿಸಿರೋಡ್ಇಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿರುದು.ಎಂದು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾದ ಬ್ರಿಜೇಶ್ ಕಂಜತ್ತೂರು, ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಾಥಮಿಕ ವಿಭಾಗ:
ವಿಷಯ:
1.ಸಂತ ಶ್ರೇಷ್ಠ ನಾರಾಯಣ ಗುರು
2.ನಾರಾಯಣ ಗುರು ವ್ಯಕ್ತಿಯಲ್ಲ ಶಕ್ತಿ
ಪ್ರೌಢಶಾಲಾ ವಿಭಾಗ:
ವಿಷಯ:
- ಸಾಮಾಜಿಕ ಬದಲಾವಣೆಯಲ್ಲಿ ನಾರಾಯಣ ಗುರು ಚಿಂತನೆಯ ಪಾತ್ರ
- ನಾರಾಯಣಗುರು ಸಂಘಟಿಸಿದ ಚಳವಳಿಗಳು ಮತ್ತು ಅವುಗಳ ಅವಶ್ಯಕತೆ
(ವಿ.ಸೂ: ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಳ್ಳುವುದು)
ನಿಯಮಗಳು:
- ಸಮಯ 4+1ನಿಮಿಷ ಮಾತ್ರ.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. - ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
- ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣಪತ್ರದೊಂದಿಗೆ ತಾ. 20/08/2024ರ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು. ಹಾಗೂ ಇಬ್ಬರಿಗೆ ಭಾಷಣ ಪ್ರಸ್ತುತಿ ಪಡಿಸಲು ಅವಕಾಶ ಕಲ್ಪಿಸಲಾಗುವುದು.
- ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ನಡೆಯುವುದು.
- ತೀರ್ಪುಗಾರರ ತೀರ್ಮಾಣವೇ ಅಂತಿಮ.
- ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ದೃಢೀಕರಣ ಪತ್ರದೊಂದಿಗೆ ಹಾಜರಾಗುವುದು.
- ಸ್ಪರ್ಧೆಗೆ ಹೆಸರು ನೋಂದಾಯಿಸಲು ಕಡೆಯ ದಿನಾಂಕ: 10/08/2024 ನೊಂದಾವಣೆಗಾಗಿ 9164800648, +91 78993 26189 ಈ ದೂರವಾಣಿ ಸಂಖೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕಾಗಿ ವಿನಂತಿಸಿದ್ದಾರೆ.






































