ವಾರ ಭವಿಷ್ಯ ದಿನಾಂಕ 21.09.2025 ರಿಂದ 27.09.2025 ರ ವರೆಗೆ
ವಿಶೇಷ ದಿನಗಳು :
ದಿನಾಂಕ 21.09.2025 ಮಹಾಲಯ ಅಮಾವಾಸ್ಯೆ ,ಕೇತು ಗ್ರಸ್ತ ಸೂರ್ಯ ಗ್ರಹಣ ,ಸರ್ವ ಪಿತೃ ದರ್ಶ :
ದಿನಾಂಕ 22.09.2025…ನವರಾತ್ರಿ ಆರಂಭ
ಮೇಷ : ದೈವಾನುಗ್ರಹದ ಕೊರತೆಯ ಹೊರತಾಗಿಯೂ ವಿವಾಹಾದಿ ಮಂಗಳ ಕಾರ್ಯಗಳ ಬಗ್ಗೆ ಚಿಂತನೆ ನಡೆಯಲಿದೆ.ವಿದ್ಯಾರ್ಥಿಗಳು ಯಶಸ್ವಿಯಾಗುವರು. ಪ್ರತಿಕೂಲ ಶನಿಯಿಂದಾಗಿ ಹಿರಿಯರಲ್ಲಿ ಕಲಹ ನಡೆಯುತ್ತಲಿರುತ್ತದೆ.ಸಂತಾನ ಅಪೇಕ್ಷಿತರಿಗೆ ಆಸೆ ಈಡೇರಲಿದೆ. ಕುಲ ದೇವರ ಪ್ರಾರ್ಥನೆ ಅಗತ್ಯವಿರುತ್ತದೆ. ನಿಮ್ಮ ದುಡುಕುತನದಿಂದ ಸಾಂಸಾರಿಕ ಜೀವನದಲ್ಲಿ ಸದಾ ಅಶಾಂತಿ ತೇಲಾಡಲಿದೆ. ಸಂಗಾತಿಯೊಂದಿಗೆ ಸದಾ ಒಂದಲ್ಲ ಒಂದು ವಿಷಯದಲ್ಲಿ ಅಸಮಾಧಾನ ವಿರುತ್ತದೆ.
ವೃಷಭ : ಉತ್ತಮ ದೈವಾನುಗ್ರಹ ಇರುವುದರಿಂದ ಹಲವಾರು ಮೂಲಗಳಿಂದ ಧನ ಲಾಭ ಬರುತ್ತಲಿರುತ್ತದೆ. ಸಾಂಸಾರಿಕವಾಗಿ ಪತಿ-ಪತ್ನಿಯರಲ್ಲಿ ಅನ್ಯೋನ್ಯ ಭಾವ ನೆಲೆಸಿರುತ್ತದೆ. ಭೂಮಿ ಖರೀಧಿ ಯೋಗವಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರಲಿವೆ. ನವರಾತ್ರಿ ಸಮಯದಲ್ಲಿ ದೇವಿಯ ಪೂಜೆ ಮಾಡಲು ಮರೆಯದಿರಿ. ಶುಭ ಸ್ಥಾನದ ಶನಿ ನಿಮ್ಮಲ್ಲಿರುವ ಎಲ್ಲಾ ಆತಂಕಗಳನ್ನು ನಿಗ್ರಹಿಸಲಿರುವನು. ಜೀವನದಲ್ಲಿ ಅನಿವಾರ್ಯವಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲೇ ಬೇಕಾಗುತ್ತದೆ.
ಮಿಥುನ : ಒಳ್ಳೆಯ ದಿನಗಳು ಕೆಲವೇ ಸಮಯದಲ್ಲಿ ಬರಲಿದೆ. ಶುಭ ಸಮಾರಂಭಗಳಿಗೆ ತಯಾರಿ ನಡೆಯಬಹುದು.ಗುರು ಜನ್ಮ ರಾಶಿಯಲ್ಲಿ ಸಂಚರಿಸುತ್ತಾ ಆಯ-ವ್ಯಯ ಸಮಾನ ರೀತಿಯಲ್ಲಿ ತೆಗೆದುಕೊಂಡು ಹೋಗಲಿದ್ದಾನೆ . ತಾಳ್ಮೆ ಅತೀ ಅಗತ್ಯವಿದೆ. ಮಕ್ಕಳೊಂದಿಗೆ ಸಿಟ್ಟು ಬಂದರೂ ಅದನ್ನು ಪ್ರೀತಿಯ ಸಿಟ್ಟನ್ನಾಗಿ ಪರಿವರ್ತಿಸಿಕೊಳ್ಳಿರಿ. ಹಿರಿಯರ ಜೊತೆಗೆ ಪ್ರೀತಿಯಿಂದ ವರ್ತಿಸಿರಿ. ವ್ಯರ್ಥ ಅಲೆದಾಟ ಸಾಮಾನ್ಯವಾಗಿರುತ್ತದೆ. ಯಾವುದೇ ಕಷ್ಟ ನಷ್ಟಗಳನ್ನು ಎದುರಿಸಲು ತಯಾರಾಗಿರಿ.
ಕರ್ಕಾಟಕ : ಉದ್ಯಮ ರಂಗದಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಅಡಚಣೆಗಳಿಂದ ಪಾರಾಗಲು ಉತ್ತಮ ಆದಾಯ ಮೂಲಗಳನ್ನು ಕಂಡುಕೊಳ್ಳಬೇಕಾಗುತ್ತದೆ.ದೈವಾನುಗ್ರಹವಿಲ್ಲದಿದ್ದಾಗ ಎಲ್ಲ ಕಾರ್ಯಗಳ ಹಿಂದೆ ಪ್ರಯತ್ನಬಲ ಬೇಕಾಗುತ್ತದೆ. ನಿಮ್ಮ ಯಶಸ್ಸನ್ನು ಕಂಡು ಮತ್ಸರ ಪಡುವವರಿದ್ದಾರೆ. ನಿಮ್ಮ ಚಟುವಟಿಕೆಗಳನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಯಬಹುದು. ಹತ್ತಿರದ ಬಂಧುಗಳಿಂದ ಅನಾವಶ್ಯಕ ಅಪವಾದಗಳನ್ನು ಕೇಳುವಿರಿ. ನಿತ್ಯವೂ ನರಸಿಂಹ ದೇವರ ಸ್ತೋತ್ರವನ್ನು ಪಾರಾಯಣ ಮಾಡಿರಿ.
ಸಿಂಹ : ಸಾಂಸಾರಿಕವಾಗಿ ಸಂತೋಷದ ವಾತಾವರಣ ಮನೆಯಲ್ಲಿರುತ್ತದೆ. ಇನ್ನೂ ಕೆಲವೇ ದಿನಗಳಲ್ಲಿ ಗುರು ಬಲ ಶೂನ್ಯವಾಗಲಿದೆ. ಎಲ್ಲರಲ್ಲಿಯೂ ನಿಷ್ಠುರ ಮಾಡಿಕೊಳ್ಳುವ ನೀವು ಅಷ್ಟಮದ ಶನಿಯ ಪ್ರಭಾವದಲ್ಲಿ ಇರುವುದನ್ನು ನೆನಪಿಸಿಕೊಡಲಾಗುತ್ತಿದೆ. ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಿದೆ. ನಿಮ್ಮ ಆಹಾರ ವ್ಯವಹಾರದ ಬಗ್ಗೆ ಬಹಳ ಎಚ್ಚರ ವಹಿಸಿರಿ. ಕಾನೂನಿನ ಹೋರಾಟ ಸದ್ಯಕ್ಕೆ ಬೇಡ. ನವ ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ.
ಕನ್ಯಾ : ಕೇತುಗ್ರಸ್ತ ಸೂರ್ಯಗ್ರಹಣದ ಪರಿಣಾಮ ನಿಮ್ಮ ಮೇಲಿರುವುದನ್ನು ಅರಿತುಕೊಳ್ಳಿರಿ. ನರಸಿಂಹ ಮಂತ್ರವನ್ನು ಪ್ರತಿನಿತ್ಯ 58 ಬಾರಿ ಹೇಳುತ್ತಾ ಬರಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಗಳಿಕೆ ಆಗಾಗ ಇಳಿಮುಖವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿ ವರ್ಗದವರ ದರ್ಪ ನಿಮ್ಮ ಬೇಸರಕ್ಕೆ ಕಾರಣವಾಗಲಿದೆ. ಮನೆ ಬದಲಾವಣೆ ನಿಮ್ಮಲ್ಲಿ ಅಸಮಾಧಾನವನ್ನು ತರಲಿದೆ. “ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದು ಇರಲಿ “ ದೇವರ ನಾಮ ಸ್ಮರಣೆ ನಿತ್ಯವೂ ನಿಮಗೆ ಅಗತ್ಯವಾಗಿದೆ.
ತುಲಾ : ಗುರುವಿನ ಅತ್ಯಂತ ಶುಭದಾಯಕ ಅನುಗ್ರಹ ಇರುವ ಸಮಯವಾಗಿದೆ. ನೀವು ಎಣಿಸಿದಂತೆ ಶುಭ ಕಾರ್ಯಗಳು ನಡೆಯುತ್ತಾ ಸಾಗಲಿದೆ. ರವಿ ವ್ಯಯದಲ್ಲಿ ಇದ್ದುಕೊಂಡು ವಿದೇಶ ಪ್ರವಾಸವನ್ನು ಸೂಚಿಸುತ್ತಿದ್ದಾನೆ. ಆಭರಣಗಳ ಬಗ್ಗೆ ಎಚ್ಚರವಿರಲಿ. ದೀರ್ಘ ಕಾಲದಿಂದ ಉಳಿದು ಹೋಗಿರುವ ಕೆಲಸಗಳೆಲ್ಲವೂ ಪೂರ್ಣಗೊಳ್ಳಲಿವೆ. ಅನ್ಯರಿಂದ ಸಹಾಯ ಸಹಕಾರ ಒದಗಿ ಬರಲಿದೆ. ಪತ್ನಿಯಿಂದ ಸ್ಪೂರ್ತಿದಾಯಕ ವಾತಾವರಣ ಸಂಸಾರದ ಮುನ್ನೆಡೆಗೆ ಸಹಕಾರವಾಗಲಿದೆ.
ವೃಶ್ಚಿಕ : ಕೈಗೊಂಡ ಕೆಲಸಗಳುಈ ಏಳು ಬೀಳುಗಳ ನಡುವೆ ಪೂರ್ಣಗೊಳ್ಳಲಿವೆ. ಮಕ್ಕಳಿಗೆ, ನಿಮ್ಮ ಮೇಲೆ, ಶನಿಯ ಪ್ರಭಾವದಿಂದ ,ವಿನಾ ಕಾರಣ ಸಿಟ್ಟು ಬರಲಿದೆ. ನೀವು ತಾಳ್ಮೆವಹಿಸಬೇಕಾಗಿದೆ. ಸಾಲಭಾಧೆ ,ಮನಸ್ಸಿಗೆ ಬೇಸರ, ಕಿರಿಕಿರಿ ಬರಲಿದೆ. ಮನೆಯಲ್ಲಿ ಶುಭ ಸಮಾರಂಭಕ್ಕೆ ತಯಾರಿ ನಡೆಯಲಿದೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ದೊರೆಯಲಿದೆ. ನಾನಾ ರೀತಿಯಲ್ಲಿ ಧನಾಗಮನ ಇರುತ್ತದೆ. ದೈವ ಬಲದ ಕೊರತೆ ಪ್ರತಿ ಕ್ಷಣವೂ ಗೋಚರಕ್ಕೆ ಬರಲಿದೆ.
ಧನು : ಲಾಭ ಕ್ಷೇತ್ರದಲ್ಲಿರುವ ಕುಜ ಮತ್ತು ಬುಧ ನಿಮಗೆ ಅನೇಕ ರೀತಿಯಲ್ಲಿ ಧನಾಗಮನವನ್ನು ನೀಡಲಿದ್ದಾನೆ. ಉದ್ಯೋಗ ಪ್ರಾಪ್ತಿ ಯೋಗವಿದೆ. ರಾಜಕೀಯದಲ್ಲಿ ಇರುವವರಿಗೆ ಬಹಳ ಒಳ್ಳೆಯ ಅವಕಾಶ ಸಿಗಲಿದೆ. ಮಾನ ಸನ್ಮಾನ ಸಮಾಜದಲ್ಲಿ ದೊರೆಯಲಿದೆ. ಪ್ರತಿಯೊಂದು ಕೆಲಸಕ್ಕೂ ಹಲವು ಬಾರಿ ಪ್ರಯತ್ನಿಸ ಬೇಕಾಗುವುದು. ವ್ಯವಹಾರ ಕ್ಷೇತ್ರದಲ್ಲಿ ಲೋಹ,ವಾಹನ ,ಯಂತ್ರ ಬೆಂಕಿ ವಿದ್ಯುತ್ ಇವುಗಳ ಬಗ್ಗೆ ಎಚ್ಚರ ವಹಿಸಿರಿ. ಇದು ಶನಿಯ ಸೂಚನೆಯಾಗಿದೆ. ಹಿತೈಷಿಗಳು ಶತ್ರುಗಳಾಗಿ ಪರಿವರ್ತನೆಗೊಳ್ಳಬಹುದು.
ಮಕರ : ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಜನರ ದೂಷಣೆಗೆ ಒಳಗಾಗದಂತೆ ಎಚ್ಚರವಹಿಸಿರಿ. ಕೌಟುಂಬಿಕವಾಗಿ ಖರ್ಚು ವೆಚ್ಚಗಳು ನಿಮ್ಮನ್ನು ಆತಂಕವಾಗುವಂತೆ ಮಾಡಲಿವೆ.ಬರುವ ಅಕ್ಟೋಬರ್ ನವೆಂಬರ್ ಡಿಸೆಂಬರ್ ಒಳ್ಳೆಯ ಸುವರ್ಣ ಯುಗವಾಗಿದೆ. ಅನ್ಯ ಮಹಿಳೆಯರ ಜೊತೆಗೆ ಯಾವುದೇ ವ್ಯವಹಾರವನ್ನು ಇಟ್ಟು ಕೊಳ್ಳಬೇಡಿರಿ. ಹಿರಿಯರ ಪ್ರಭಾವದಿಂದ ಉದ್ಯೋಗ ಪ್ರಾಪ್ತಿ ಯೋಗವಿದೆ. ಅವಿವಾಹಿತರ ಮಾಂಗಲ್ಯ ಭಾಗ್ಯ ಕುಟುಂಬದಿಂದ ಹೊರ ನಡೆದವರ ಪುನರ್ ಬೆಸುಗೆಗೆ ಸಹಾಯವಾಗಲಿದೆ.
ಕುಂಭ : ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭವನ್ನು ಗಳಿಸುವಿರಿ. ಸೇವಾ ಕಾರ್ಯಗಳಿಂದ ಪ್ರಶಂಸೆ ,ಉದ್ಯೋಗದಲ್ಲಿ ಮುಂಭಡ್ತಿ ,ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ,ಹಿರಿಯರಿಂದ ಗೌರವ,ಸಂತಾನ ಸುಖ. ಗೃಹ ವಾಹನಾದಿ ಖರೀಧಿ ಮಾಡುವಿರಿ. ಈ ಮಧ್ಯೆ ರಾಹು ಮತ್ತು ಶನಿ ಸೂರ್ಯ ಗ್ರಹಣದ ಕಾಲದಲ್ಲಿ ಕೆಲವೊಂದು ಕಿರಿಕಿರಿಯನ್ನು ಮಾಡಲಿದ್ದಾನೆ.ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಕಂಡು ಬರಲಿದೆ. ನಿಮ್ಮಲ್ಲಿ ಧರ್ಮ ಬಾಹಿರ ಪ್ರವೃತ್ತಿಯನ್ನು ತರಲಿದ್ದಾರೆ.
ಮೀನ : ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸದಲ್ಲಿ ಉತ್ತಮ ಪ್ರಗತಿ ದೊರೆಯಲಿದೆ. ಸಂಧ್ಯಾ ಕಾಲದಲ್ಲಿ ,ವಾಹನ ಚಾಲನೆಯಲ್ಲಿ ,ನೀರಿನ ಬದಿಯಲ್ಲಿ ಶಾರೀರಿಕ ತೊಂದರೆಗಳು ಬರುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಬೇಕು.ಸೂರ್ಯ ಗ್ರಹಣ ಆರಂಭವಾಗುವ ,ಮುಗಿದ ,ಒಂದು ವಾರ ಸಮಯ ಎಚ್ಚರವಿರಲಿ. ಹೊಸ ಚಿಂತನೆ ,ಅನುಷ್ಠಾನ ಕೆಲವೇ ಸಮಯದಲ್ಲಿ ಆರಂಭಗೊಳ್ಳಲಿದೆ. ಹೊಸ ಸ್ಥಳಗಳ ಪ್ರವಾಸ ಮಾಡುವಿರಿ. ಮೊಮ್ಮಗುವಿನ ಜೊತೆಗೆ ಆಟವಾಡುವ ಸುಯೋಗ ಒದಗಿ ಬರಲಿದೆ.






































