ಸಾಣೂರು ಸೇತುವೆಯ ರಸ್ತೆಯನ್ನು ಸದೃಢಗೊಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ
ಕಾರ್ಕಳ : ಕಳೆದ ಕೆಲದಿಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕಾರ್ಕಳದ ಸಾಣೂರು ಶಾಂಭವಿ ಸೇತುವೆಯ ಎಡ ಭಾಗದಲ್ಲಿ ರಸ್ತೆಯ ಬದಿಯಲ್ಲಿಯೇ ಮಣ್ಣು ಕುಸಿತಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ಥಿ ಕಾಮಗಾರಿ ನಡೆಸಿದೆ.
ಹೆದ್ದಾರಿಯ ಒಂದು ಪಾಶ್ವವು ಮಳೆ ನೀರಿನ ರಭಕ್ಕೆ ಕುಸಿದುಹೋಗಿತು. ಇದರ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯು ಅಗತ್ಯ ಕ್ರಮ ಕೈಗೊಂಡಿದೆ.
ಮಣ್ಣುಕೊಚ್ಚಿ ಹೋದ ಭಾಗಕ್ಕೆ ಕಾಂಕ್ರೀಟ್ ಕರಣಗೊಳಿಸಿ ಹೆದ್ದಾರಿಯನ್ನು ಸದೃಢ ಗೊಳಿಸಲಾಗಿದೆ.
ವರದಿ ಪ್ರಕಟಿಸಿದ ಆರ್.ಬಿ.ನ್ಯೂಸ್

ಸಾಣೂರು ಶಾಂಭವಿ ನದಿ ಸೇತುವೆಯ ರಸ್ತೆ ಬದಿ ಭೂಕುಸಿತ ಶೀರ್ಷಿಕೆಯಡಿ ಜು.19ರಂದು ಸಚಿತ್ರ ವರದಿ ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತು.
ರಾಷ್ಟ್ರೀಯ ಹೆದ್ದಾರಿ ಯೋಜನೆ ಅನುಷ್ಠಾನಕ್ಕೆ ತರುವ ಪೂರ್ವದಲ್ಲಿ ಸಮರ್ಪಕ ರೂಪುರೇಷೆ ಸಿದ್ಧ ಪಡಿಸದೇ ಹೋದುದರಿಂದ ಬಹಳಷ್ಟು ಸಮಸ್ಸೆಗಳನ್ನು ನಾಗರಿಕರು ಎದುರಿಸಬೇಕಾಗಿತು.
ಸಮಸ್ಸೆಗೆ ಸ್ಪಂದನೆ ಸಿಗದಾಗ ವಿವಿಧ ಸ್ತರಗಳಲ್ಲಿ ಹೋರಾಟವನ್ನು ಸಾಣೂರು ಗ್ರಾಮಸ್ಥರು ನಡೆಸಿದ್ದಾರೆ. ಗ್ರಾಮಸ್ಥರ ಹೋರಾಟಕ್ಕೆ ಜಿಲ್ಲಾಡಳಿತವೇ ಮಣಿದು ಸಾಣೂರಿಗೆ ಅಗಮಿಸಿರುವುದು ಗಮನಾರ್ಹ.
ಈ ನಡುವೆ ಮುರತ್ತಂಗಡಿ ಜಂಕ್ಷನ್ ದಲ್ಲಿ ಅಪಾಯಕಾರಿ ಮೋರಿಗೆ ಜಲ್ಲಿಕಲ್ಲು ತುಂಬಿಸಿ ಮುಚ್ಚಲಾಗಿದೆ.
ಅಭಿವೃದ್ಧಿ ಕಾಮಗಾರಿಯೂ ಜನಪರವಾಗಿ ಇರಲೇ ಬೇಕು ಎಂಬುವುದನ್ನು ಸಾಣೂರು ಗ್ರಾಮಸ್ಥರು ತೋರ್ಪಡಿಸುವ ಮೂಲಕ ಸಮಾಜಕ್ಕೆ ಮಾದರಿ ಎಂದರೂ ತಪ್ಪಾಗಲಾರದು.








































