ವಾರಭವಿಷ್ಯ 14.06.2026 ರಿಂದ 20.06.2026ರ ತನಕ
ವಿಶೇಷ ದಿನಗಳು :15.06.2026….. ಮಿಥುನ ಸಂಕ್ರಮಣ, ಸೋಮಾವತಿ ಅಮಾವಾಸ್ಯೆ, 20.06.2026….. ವೃಷಭ ರಾಶಿಗೆ ಕುಜನ ಪ್ರವೇಶ
ಮೇಷ : ಶನಿ ಮತ್ತು ಕುಜರು ತಿಳಿಸುವಂತೆ ಯಾರನ್ನೂ ಜೀವನದಲ್ಲಿ ಅತಿಯಾಗಿ ನಂಬಬೇಡಿರಿ. ಅಧಿಕಾರ ಸಿಕ್ಕಿದಾಗ ದುರ್ಬಳಕೆ ಬೇಡ. ಅತಿಯಾದ ಉದಾಸೀನತೆ ಮಾರಕವಾಗುತ್ತದೆ. ಕೃಷಿ ಚಟುವಟಿಕೆಗಳಲ್ಲಿ ಹೊಸ ಪ್ರಯೋಗವನ್ನು ಮಾಡುವಿರಿ. ಕಣ್ಣಿನ ಬಗ್ಗೆ ಎಚ್ಚರವಿರಲಿ.
ವೃಷಭ : ಕೆಲಸದಲ್ಲಿ ಒತ್ತಡವಿರುತ್ತದೆ. ವೈವಾಹಿಕ ಜೀವನದಲ್ಲಿ ಚಂಚಲತೆ ಇರಲಿದೆ. ಇಟ್ಟ ಹೆಜ್ಜೆಯನ್ನು ಹಿಂದೆಗೆಯಬೇಡಿರಿ, ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಶುಭ ಕಾರ್ಯಗಳಿಗೆ ಅಡೆ ತಡೆ ಇರಲಿದೆ. ಎಲ್ಲವೂ ನೀವು ಹೇಳಿದಂತೆ ಆಗಬೇಕು ಎನ್ನುವುದು ಸರಿಯಲ್ಲ.
ಮಿಥುನ : ಪಾಲುದಾರಿಕೆಯಲ್ಲಿ ಹೊಸ ವ್ಯವಹಾರಗಳನ್ನು ನಡೆಸಿ ಲಾಭ ಹೆಚ್ಚಿಸಿ ಕೊಳ್ಳಿರಿ. ಸಾಂಸಾರಿಕ ವಿಷಯಗಳಲ್ಲಿ ತಾಳ್ಮೆ ಇರಲಿ. ಭೂಮಿ ಮತ್ತು ಮನೆ ಖರೀಧಿಗೆ ಒಳ್ಳೆಯ ಸಮಯ. ಇನ್ನೊಬ್ಬರ ಭಾವನೆಗಳಿಗೆ ಮಾನ್ಯತೆ ಕೊಡುವುದು ಅಗತ್ಯವಿದೆ. ಗುರುವಿನ ಅನುಗ್ರಹ ಇರುವ ಸಮಯವಾಗಿದೆ.
ಕರ್ಕಾಟಕ : ಕುಟುಂಬದವರೊಂದಿಗೆ ಒಡನಾಟ ಸಲ್ಲಾಪಗಳಿದ್ದರೆ ಕೌಟುಂಬಿಕ ಸಮಾಧಾನವಿರುತ್ತದೆ. ಮನಸ್ಸು ನಿಮ್ಮ ಹಿಡಿತದಲ್ಲಿರಲಿ. ತಲೆನೋವಿನ ಭಾದೆ ಕಾಡಲಿದೆ. ಯಥಾ ಶಕ್ತಿಯಾಗಿ ನಾಗ ದೇವರ ಸೇವೆಯನ್ನು ಮಾಡುತ್ತಾ ಬನ್ನಿರಿ. ಅಪೂರ್ಣವಾಗಿರುವ ಕೆಲಸಗಳಿಗೆ ಪೂರ್ಣತೆ ಬರಲಿದೆ.
ಸಿಂಹ : ಸವಾಲುಗಳನ್ನು ಎದುರಿಸುವ ಧೈರ್ಯ ತೋರಿದರೆ ಯಶಸ್ಸು ನಿಮ್ಮದಾಗಲಿದೆ. ಕಾರ್ಯ ಪೂರೈಕೆಯಲ್ಲಿ ಸಮಯದ ಮಿತಿ ಪಾಲಿಸಿದರೆ ಲಾಭಹೆಚ್ಚಲಿದೆ. ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಇರಲಿ. ಖರ್ಚಿನ ಮೇಲೆ ಹಿಡಿತ ಇರಲಿ ದೈವಾನುಗ್ರಹದ ಕೊರತೆ ಇರುವುದು ನೆನಪಿನಲ್ಲಿರಲಿ. ದೂರ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ.
ಕನ್ಯಾ : ಉತ್ತಮವಾದ ದೈವಾನುಗ್ರಹ ಇರುವುದರಿಂದ ಬುದ್ದಿವಂತಿಕೆಯಿಂದ ಯಾವುದೇ ಕೆಲಸಗಳನ್ನು ಮಾಡಿ ಮುಗಿಸುವಿರಿ, ಶನಿ ಕುಜರ ಕಾರಣದಿಂದ ಮನಸ್ಸು ಚಂಚಲಗೊಳ್ಳಲಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿ ದೊರೆಯಲಿದೆ. ಆರೋಗ್ಯದ ಕಡೆಗೆ ಗಮನವಿರಲಿ.
ತುಲಾ : ವ್ಯಾಪಾರ ವ್ಯವಹಾರಗಳಲ್ಲಿ ಸಾಲವಾಗದಂತೆ ಎಚ್ಚರವಹಿಸಿರಿ, ಸಂಗೀತ ನೃತ್ಯ ಕಲಾವಿದರಿಗೆ ಉತ್ತಮ ಭವಿಷ್ಯ ದೊರೆಯಲಿದೆ. ವಿಷ್ಣು ಸಹಸ್ರ ನಾಮ ಪಾರಾಯಣ ಮಾಡುವುದು ಅಗತ್ಯವಿದೆ. ಮಾತು ಕಡಿಮೆಯಿರಲಿ, ಮಕ್ಕಳು ಕೂಡಾ ಸೂಕ್ತ ಸಮಯದಲ್ಲಿ ಸಹಾಯಕ್ಕೆ ಬಾರಲಾರರು.
ವೃಶ್ಚಿಕ : ರಾಹು ಶನಿಗೆ ಸೂಕ್ತ ಪರಿಹಾರವನ್ನು ಮಾಡಿಕೊಂಡಲ್ಲಿ ಉತ್ತಮ ಭವಿಷ್ಯವಿದೆ. ಸಂಸಾರದಲ್ಲಿ ಹೊಂದಾಣಿಕೆ ಇರಲಿ. ರಾಜಕೀಯ ಗಣ್ಯರಿಗೆ ಸೂಕ್ತ ಗೌರವ ಪ್ರಾಪ್ತಿ ಯೋಗವಿದೆ. ಭೂಮಿ ಪ್ರಾಪ್ತಿ ಯೋಗವಿದೆ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಮಾಡುವ ಪ್ರಯತ್ನ ಸಫಲವಾಗಲಿದೆ.
ಧನು : ಗುರುವಿನ ಅನುಗ್ರಹದ ಕೊರತೆ ಇರುವುದು ನಿಮಗೆ ತಿಳಿದಿರಲಿ. ಆರೋಗ್ಯದ ಕಡೆಗೆ ಗಮನ ಅತೀ ಅಗತ್ಯವಿದೆ. ಭಾರವಾದ ವಸ್ತುಗಳನ್ನು ಎತ್ತುವುದು ಬೇಡ. ವಾಹನ ಚಾಲಕರು ಎಚ್ಚರದಲ್ಲಿರುವುದು ಒಳ್ಳೆಯದು, ಹಣದ ವಿಷಯದಲ್ಲಿ ಎಚ್ಚರವಿರಲಿ.
ಮಕರ : ಹಳೆಯ ಸಮಸ್ಯೆಗಳೆಲ್ಲಾ ಒಂದೊಂದಾಗಿ ಪರಿಹಾರವಾಗಲಿದೆ. ದೈವಾನುಗ್ರಹ ಪ್ರಾಪ್ತಿಯಾಗಿದೆ. 59 ವರ್ಷಗಳ ನಂತರ ಗುರು ಶುಕ್ರ ಬುಧ ಜೊತೆಯಾಗಿ ನಿಮಗೆ ಅನುಗ್ರಹ ನೀಡಲಿದ್ದಾರೆ. ಬರುವ ಆದಾಯದಲ್ಲಿ ಗಣನೀಯವಾಗಿ ಹೆಚ್ಚಾಗಲಿದೆ. ಮನಸ್ಸಿನ ಭಯ ನಿವಾರಣೆಗಾಗಿ ದೇವಿ ಕ್ಷೇತ್ರಕ್ಕೆ ಹೋಗುವುದು ಒಳ್ಳೆಯದು.
ಕುಂಭ : ಸಾಡೇ ಸಾತ್ ಶನಿಯ ಪ್ರಭಾವಾದ ಜೊತೆಗೆ ಗುರುವಿನ ಅನುಗ್ರಹದ ಕೊರತೆಯೂ ಕಾಡಲಿದೆ. ನಿಮ್ಮ ತಾಯಿಯವರ ಆರೋಗ್ಯ ನಿಮ್ಮನ್ನು ಚಿಂತೆಗೇಡು ಮಾಡಲಿದೆ. ನಿಮ್ಮ ಬಿ ಪಿ ಹಿಡಿತದಲ್ಲಿರಲಿ. ಯಾರಲ್ಲಿಯೂ ಸಿಟ್ಟು ಮಾಡುವುದು ಬೇಡ ಉದ್ವೇಗ ಗೊಳ್ಳುವುದು ಹೆಚ್ಚಾಗಲಿದೆ.
ಮೀನಾ : ನಿಮಗೆ ಸಾಡೇ ಸಾತ್ ಶನಿಯ ಪ್ರಭಾವದಿಂದ ಮನಸ್ಸು ಚಂಚಲಗೊಳ್ಳಲಿದೆ. ಗುರುವಿನ ಅನುಗ್ರಹವಿರುವುದರಿಂದ ಚಿಂತೆ ಮಾಡುವ ಆಗತ್ಯವಿರುವುದಿಲ್ಲ. ಸಹೋದರನ ಜೊತೆಗೆ ಕಲಹ ಬರುವ ಸೂಚನೆ ಇರುತ್ತದೆ. ನಾಗ ದೇವರ ಆರಾಧನೆ ಡಿಸೆಂಬರ್ ತಿಂಗಳ ವರೆಗೆ ಅಗತ್ಯವಿದೆ.

































