ಕಾರ್ಕಳ : ಬೈಲೂರು- ಎರ್ಲಪ್ಪಾಡಿಯ ಉಮ್ಮಿಕಲ್ಲು ಬೆಟ್ಟದಲ್ಲಿ ನಿರ್ಮಾಣದ ಹಂತದಲ್ಲಿ ಇರುವ
ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಶೀಘ್ರ ಪುನರ್ ಆರಂಭಿಸಬೇಕು.
ಆ ಮೂಲಕ ಪ್ರವಾಸಿಗರ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಜನಾಗ್ರಹ ಸಮಿತಿ ಪರಶುರಾಮ ಥೀಂ ಪಾರ್ಕ್ ಬೈಲೂರು-ಯರ್ಲಪಾಡಿ ಇದರ ವತಿಯಿಂದ ಮೇ 06 ರಂದು ಸಂಜೆ 5.00 ಗಂಟೆಗೆ ಜನಾಗೃಹ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಪರಶುರಾಮ ಥೀಂ ಪಾರ್ಕ್ ಬೈಲೂರು ಯರ್ಲಪಾಡಿ ಜನಾಗ್ರಹ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






































