ಈದು: ಸಾಮೂಹಿಕ ಶನೈಶ್ಚರ ಪೂಜೆ,ಕುಣಿತ ಭಜನಾ ಕಾರ್ಯಕ್ರಮ ಮತ್ತು ಹಿಂದೂ ಧರ್ಮ ಜಾಗೃತಿ ಸಭೆ
ಡಾ.ರವೀಂದ್ರ ಶೆಟ್ಟಿ ಬಜಗೋಳಿಯವರಿಗೆ ಸನ್ಮಾನ
ಕಾರ್ಕಳ ; ಶ್ರೀ ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ ಈದು,ಹಿಂದೂ ಜಾಗರಣ ವೇದಿಕೆ,ಹಿಂದೂ ಮಹಿಳಾ ಜಾಗರಣ ,ಭಗತ್ ಸಿಂಗ್ ಘಟಕ ಈದು ಇದರ ಆಶ್ರಯದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ,ಕುಣಿತ ಭಜನಾ ಕಾರ್ಯಕ್ರಮ ಮತ್ತು ಹಿಂದೂ ಧರ್ಮ ಜಾಗೃತಿ ಸಭೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಶ್ರೀ ಗುರುದೇವ ದತ್ತ ಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರುರವರು ಆಶೀರ್ವಚನಗೈದರು. ಉಪನ್ಯಾಸಕರೂ,ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗದ ಪ್ರಮುಖ್ ಆಗಿರುವ ಕೇಶವ ಬಂಗೇರ ಪ್ರಧಾನ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಮಾಲಕರ ಸಂಘ (ರಿ.) ಹಾಗೂ ಈದು ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ (ರಿ.) ನ ಗೌರವಾಧ್ಯಕ್ಷರಾದ ಡಾ.ರವೀಂದ್ರ ಶೆಟ್ಟಿ ಬಜಗೋಳಿಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ಸಂಚಾಲಕರಾದ ಗುರುಪ್ರಸಾದ್ ನಾರಾವಿ,ಉದ್ಯಮಿ ಅರುಣ್ ಕುಮಾರ್ ನಿಟ್ಟೆ,ಭಜನಾ ತರಭೇತುದಾರ ಅಶೋಕ್ ಕಳಸಬೈಲು,ಜೈ ತುಳುನಾಡು ವೇದಿಕೆ(ರಿ.)ಯ ಅಧ್ಯಕ್ಷರಾದ ವಿಶು ಶ್ರೀಕೇರ,ವಸಂತ ಪಡ್ಡಾಯಿ ಪಾಪು,ಎಸ್ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಸುದರ್ಶನ್,ಈದು ಮೂಕಾಂಬಿಕಾ ಯುವಕ ಸಂಘದ ಅಧ್ಯಕ್ಷರಾದ ಯೋಗೀಶ್ ಪೂಜಾರಿ,ಈದು ಹಿಂದೂ ಜಾಗರಣ ವೇದಿಕೆ ಭಗತ್ ಸಿಂಗ್ ಘಟಕದ ಅಧ್ಯಕ್ಷರಾದ ಪ್ರಸಾದ್ ಶರ್ಮ,ಈದು ಮಹಿಳಾ ಜಾಗರಣ ವೇದಿಕೆ ಘಟಕದ ಅಧ್ಯಕ್ಷೆ ಪ್ರೇಮಾ,ಹಿಂದೂ ಮಹಿಳಾ ಜಾಗರಣ ವೇದಿಕೆ ಭಗತ್ ಸಿಂಗ್ ಘಟಕ ಈದು ಇದರ ಸಹಸಂಚಾಲಕರಾದ ಲಾವಣ್ಯ ಈದು ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಪ್ರವೀಣ್ ಶೆಟ್ಟಿ ಭಜನಾ ತರಭೇತುದಾರರ ದೀನ್ ರಾಜ್ ಕಳವಾರ್ ಉಪಸ್ಥಿತರಿದ್ದರು.





































