ಅಂಬಲಪಾಡಿ ಬೆಂಕಿ ದುರಂತ: ಗಂಡನ ಬೆನ್ನಲ್ಲೇ ಪತ್ನಿಯೂ ಮೃತ್ಯು

Picture of RB NEWS

RB NEWS

Bureau Report

ಉಡುಪಿ : ಅಂಬಲಪಾಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ಶೆಟ್ಟಿ (50) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದೇ ಘಟನೆಯಿಂದ ಆಕೆಯ ಪತಿ ರಮಾನಂದ ಶೆಟ್ಟಿ (55) ಜೂನ್ 15 ರಂದು ನಿಧನರಾಗಿದ್ದರು.

ಜೂನ್ 15 ರಂದು ರಮಾನಂದ ಮತ್ತು ಅಶ್ವಿನಿ ಶೆಟ್ಟಿ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಗೆ ಹೆಚ್ಚಿನ ಹಾನಿ ಮತ್ತು ನಿವಾಸಿಗಳಿಗೆ ಗಾಯಗಳಾಗಿವೆ. ಮೂರು ಅಂತಸ್ತಿನ ಮನೆಯ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ, ತನಿಖೆಯಲ್ಲಿದೆ.

ಜೂನ್ 15 ರಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಮನೆಯೊಳಗೆ ದಟ್ಟ ಹೊಗೆ ಆವರಿಸಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾರ್ಯಾಚರಣೆ ನಡೆಸಬೇಕಾಯಿತು. ಬಾತ್ ರೂಂನಲ್ಲಿ ಅಡಗಿಕೊಂಡಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ.

ಸೆಂಟ್ರಲ್ ಎಸಿ ಹೊಂದಿದ ಮನೆಯಲ್ಲಿ ಘಟನೆಯ ತೀವ್ರತೆಗೆ ಕಾರಣವಾಗಿದೆ. ಹೊಗೆ ಸೇವನೆಯಿಂದ ರಮಾನಂದ ಶೆಟ್ಟಿ ಸಾವನ್ನಪ್ಪಿದ್ದು, ಅಶ್ವಿನಿ ಶೆಟ್ಟಿ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಅಶ್ವಿನಿ ಶೆಟ್ಟಿ ದಾಯ್ಜಿವರ್ಲ್ಡ್ ಟಿವಿಯ ಕೋಸ್ಟಲ್ ಚೆಫ್ ಕುಕಿಂಗ್ ರಿಯಾಲಿಟಿ ಶೋನ ಸೆಮಿ-ಫೈನಲಿಸ್ಟ್ ಆಗಿದ್ದರು. ಅವರು ಪ್ರಭಾವಿ ವ್ಲಾಗರ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು. ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top