
ಕರಾವಳಿ ರಂಗಾಯಣವೇ ಸರಿಯಾದ ಮತ್ತು ಸೂಕ್ತ ಹೆಸರು. ಬಿವಿಕಾರಂತರ ಅಪೇಕ್ಷೇಯು ಅದೇ ಆಗಿತ್ತು – ಶುಭದರಾವ್ ಕಾರ್ಕಳ

• ಕರಾವಳಿಯ ಭಾಗದಲ್ಲಿಯೂ ಒಂದು ರಂಗಾಯಣವನ್ನು ಆರಂಭಿಸ ಬೇಕೆನ್ನುವುದು ಕೀರ್ತಿಶೇಷ ಬಿ.ವಿ ಕಾರಂತರ ಕನಸುಗಳಲ್ಲಿ ಒಂದಾಗಿತ್ತು ಮತ್ತು ಆ ಪ್ರಯತ್ನ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಾಕಾರಗೊಂಡಿದೆ.
• ಮೈಸೂರು ರಂಗಾಯಣವನ್ನು ಸ್ಥಾಪಿಸಿದ ಬಳಿಕ ಕರ್ನಾಟಕದಲ್ಲಿ ಇಂತಹ ಇನ್ನೂ ನಾಲ್ಕು ರಂಗಾಯಣಗಳ ಅಗತ್ಯವಿದೆ ಎನ್ನುವುದು ಕಾರಂತರ ಇಂಗಿತವಾಗಿತ್ತು. ಇದು ಕರ್ನಾಟಕದ ನಾಲ್ಕು ದಿಕ್ಕಿನ ನೆಲದ ಆಸ್ಮಿತೆಯನ್ನು ಸ್ಪುರಿಸಬೇಕೆನ್ನುವುದು ಅವರ ಆಶಯವಾಗಿತ್ತು.
• ಇಂದು ನಾಲ್ಕು ರಂಗಾಯಣಗಳ ಬದಲಿಗೆ ಆರು ರಂಗಾಯಣಗಳು ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕಿನಲ್ಲಿ ಭೌತಿಕವಾಗಿ ಆರಂಭಗೊಂಡ ರಂಗಾಯಣವು ಒಂದು.
• ಪ್ರಾರಂಭಿಕ ದಿನಗಳಲ್ಲಿ ದ.ಕ ಜಿಲ್ಲೆ, ಉ.ಕ ಜಿಲ್ಲೆಯ ರಂಗಕಲಾವಿದರನ್ನು, ರಂಗ ಚಿಂತಕರನ್ನು ಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ತರಾತುರಿಯಲ್ಲಿ ರಂಗಾಯಣವನ್ನು ಕಾಕ೯ಳದಲ್ಲಿ ಪ್ರತಿಷ್ಟಾಪಿಸಿ ರಂಗಸಮಾಜ ನಗೆ ಪಾಟಲಾದದ್ದು ಇದೆ.







































